.
| ಎಡದಿಂದ ಬಲಕ್ಕೆ:- | ||||||||||
.
| |||||||||||
.
| ೧. ಕನ್ನಡಿಗರ ನಾಡಹಬ್ಬ (೭) | ||||||||||
.
| ೫. ನವೀನತೆಯ ಹುಟ್ಟು (೪) | ||||||||||
.
| ೬. ಹಾಡು ಹೇಳಿದ್ದಕ್ಕೆ ಕೊಟ್ಟ ಬಿಲ್ಲೆ (೩) | ||||||||||
.
| ೮. ಶಪಿಸಲ್ಪಟ್ಟ ಹೆಂಡತಿ (೪) | ||||||||||
.
| ೧೦. ಸಂಗಡ (೨) | ||||||||||
.
| ೧೨. ಮಧ್ಯದಲ್ಲೇಕೊ ಗರಂ ಆಗಿರುವ ಪ್ರೀತಿಯ ಬಣ್ಣ (೪) | ||||||||||
.
| ೧೫. ಕಾವ್ಯ-ನಾಟಕಗಳಲ್ಲಿ ಬರುವ ಒಂಬತ್ತು ಸಾರ (೪) | ||||||||||
.
| ೧೭. ಮಂಜುಗೆಡ್ಡೆ (೨) | ||||||||||
.
| ೧೯. ಅಂತ್ಯದಲ್ಲಿ ಧೀರ್ಘವಾದ ಕಣಗಲೆ (೪) | ||||||||||
.
| ೨೧. ರಸ ವೇಗವಾಗಿ ಹರಿದಿದೆ (೩) | ||||||||||
.
| ೨೨. ಹಾದಿಯಲ್ಲಿ ತಿರುಗುವವನು ಹಿಂತಿರುಗಿದ್ದಾನೆ (೪) | ||||||||||
.
| ೨೪. ಮಾಸ್ತಿಯವರ ಈ ಕೃತಿಗೆ ಙ್ಞಾನಪೀಠ ಪ್ರಶಸ್ತಿ ಸಂದಿದೆ (೭) | ||||||||||
.
| |||||||||||
.
| ಮೇಲಿನಿಂದ ಕೆಳಕ್ಕೆ :- | ||||||||||
.
| |||||||||||
.
| ೧. ಶಿಲೆಯಲ್ಲಿ ಕೊರೆದಿಟ್ಟ ಬರಹ (೬) | ||||||||||
.
| ೨. ನಮ್ಮ ದೇಶದ ಪ್ರಥಮ ಪ್ರಜೆ (೪) | ||||||||||
.
| ೩. ಅಡವಿ (೨) | ||||||||||
.
| ೪. ಹಾಲಿನಿಂದ ತಯಾರಿಸಿದ ಸಿಹಿಯಾದ ಭಕ್ಷ್ಯ (೩) | ||||||||||
.
| ೭. ಕಡ್ಡಿಯೊಂದಿಗಿನ ಕೊಳೆ (೨) | ||||||||||
.
| ೯. ಮಾಲೆ ಹಾಕಿ ಅಗೌರವಿಸುವುದಿರಬಹುದೆ? (೩) | ||||||||||
.
| ೧೧. ಶಿವನನ್ನು ಧೀರ್ಘವಾಗಿ ಕರೆಯಿರಿ (೨) | ||||||||||
.
| ೧೩. ಏನೂ ತಿಳಿಯದ ಹಳ್ಳಿಯವನು (೩) | ||||||||||
.
| ೧೪. ಪೂಜ್ಯ ಮಂತ್ರಾಲಯ ನಿವಾಸಿ (೬) | ||||||||||
.
| ೧೬. ಇಲ್ಲಿ ನಿಮ್ಮ ರುಜು ಹಾಕಿ (೨) | ||||||||||
.
| ೧೮. ಸಸಿಯಲ್ಲ ವೃಕ್ಷ (೨) | ||||||||||
.
| ೧೯. ಕನಕ (೪) | ||||||||||
.
| ೨೦. ಮೋಸ ಮಾಡಿ ನಲಿಯುತ್ತಿರುವ ಗಿಲೀಟು (೩) | ||||||||||
.
| ೨೩. ಹಾಸ್ಯಬ್ರಹ್ಮನೆಂದು ಖ್ಯಾತರಾದ ಕನ್ನಡದ ಲೇಖಕರು (೨) ಉತ್ತರ |
fly
ತಾಣದ ಸಂದೇಶ
ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ಮಾಡಿರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀
ಸೋಮವಾರ, ಜೂನ್ 30, 2014
ಪದಗಳ ಬಂದ 1
Labels:
ಪದ ಬಂಧ
ನಾನು ಒಬ್ಬ ಕನ್ನಡ ಪ್ರೇಮಿ,
ಕನ್ನಡವನ್ನು ಎಲ್ಲೆಡೆ ಕಾಣುವ ಬಯಕೆ....
ಜೈ ಕನ್ನಡಾಂಬೆ....
ಶನಿವಾರ, ಜೂನ್ 28, 2014
ಇತಿ ಮಿತಿ
ಒಬ್ಬ ವ್ಯಕ್ತಿ ಅವನು ಎಷ್ಟೇ
ಆತ್ಮೀಯನಾದರೂ,
ಅವನ ಬಳಿ ನಮ್ಮ ಒಳ ಹೊರಗುಟ್ಟುಗಳೆಲ್ಲವನ್ನೂ (ಇತಿ ಮಿತಿಗಳನ್ನು) ಬಿಚ್ಚಿಡಕೂಡದು,
ಕಾರಣ, ಅದೇ ಆತ್ಮೀಯತೆಯೆಂಬುದು ಮುಂದೊಂದು ದಿನ ಆತ್ಮವಂಚನೆಗೆ ಸುಲಭ ಮಾರ್ಗವಾಗಬಹುದು.
ಅವನ ಬಳಿ ನಮ್ಮ ಒಳ ಹೊರಗುಟ್ಟುಗಳೆಲ್ಲವನ್ನೂ (ಇತಿ ಮಿತಿಗಳನ್ನು) ಬಿಚ್ಚಿಡಕೂಡದು,
ಕಾರಣ, ಅದೇ ಆತ್ಮೀಯತೆಯೆಂಬುದು ಮುಂದೊಂದು ದಿನ ಆತ್ಮವಂಚನೆಗೆ ಸುಲಭ ಮಾರ್ಗವಾಗಬಹುದು.
Read more at http://nammakannadanaadu.com/subhashita/
ಒಬ್ಬ ವ್ಯಕ್ತಿ ಅವನು ಎಷ್ಟೇ
ಆತ್ಮೀಯನಾದರೂ ಅವನ ಬಳಿ ನಮ್ಮ ಒಳ ಹೊರಗುಟ್ಟುಗಳೆಲ್ಲವನ್ನೂ (ಇತಿ ಮಿತಿಗಳನ್ನು)
ಬಿಚ್ಚಿಡಕೂಡದು. ಕಾರಣ ಅದೇ ಆತ್ಮೀಯತೆಯೆಂಬುದು ಮುಂದೊಂದು ದಿನ ಆತ್ಮವಂಚನೆಗೆ ಸುಲುಭ
ಮಾರ್ಗವಾಗಬಹುದು.
Read more at http://nammakannadanaadu.com/subhashita/
Read more at http://nammakannadanaadu.com/subhashita/
Labels:
ವಿಚಿತ್ರವಾದರು ಸತ್ಯ
ನಾನು ಒಬ್ಬ ಕನ್ನಡ ಪ್ರೇಮಿ,
ಕನ್ನಡವನ್ನು ಎಲ್ಲೆಡೆ ಕಾಣುವ ಬಯಕೆ....
ಜೈ ಕನ್ನಡಾಂಬೆ....
ಶುಕ್ರವಾರ, ಜೂನ್ 27, 2014
ಕೋಳಿ ಮರಿ
Labels:
ಸರಳ ಕಲೆ
ನಾನು ಒಬ್ಬ ಕನ್ನಡ ಪ್ರೇಮಿ,
ಕನ್ನಡವನ್ನು ಎಲ್ಲೆಡೆ ಕಾಣುವ ಬಯಕೆ....
ಜೈ ಕನ್ನಡಾಂಬೆ....
ಗುರುವಾರ, ಜೂನ್ 26, 2014
ಅಕ್ಕಮಹಾದೇವಿ - 1
ಅಕ್ಕಮಹಾದೇವಿ
ಬಸವಣ್ಣನ ಭಕ್ತಿ, ಚೆನ್ನಬಸವಣ್ಣನ ಜ್ಞಾನ,
ಮಡಿವಾಳಯ್ಯನ ನಿಷ್ಠೆ, ಪ್ರಭುದೇವರ ಜಂಗಮಸ್ಥಲ,
ಅಜಗಣ್ಣನ ಐಕ್ಯಸ್ಥಲ, ನಿಜಗುಣನ ಆರೂಢಸ್ಥಲ,
ಸಿದ್ಭರಾಮಯ್ಯನ ಸಮಾಧಿಸ್ಥಲ.
ಇಂತಿವರ ಕರುಣಪ್ರಸಾದ ಎನಗಾಯಿತ್ತು ಚೆನ್ನಮಲ್ಲಿಕಾರ್ಜುನಯ್ಯಾ.
--- ಅಕ್ಕಮಹಾದೇವಿ
ಅಂಕಿತ ನಾಮ:
ಚೆನ್ನಮಲ್ಲಿಕಾರ್ಜುನ
ಕಾಲ : ಹನ್ನೆರಡನೆಯ ಶತಮಾನ
ದೊರಕಿರುವ ವಚನಗಳು: 434 (ಆಧಾರ: ಸಮಗ್ರ ವಚನ ಸಂಪುಟ)
ತಂದೆ/ತಾಯಿ : ನಿರ್ಮಲಶೆಟ್ಟಿ ಮತ್ತು ಸುಮತಿ
ಹುಟ್ಟಿದ ಸ್ಥಳ :
ಕಾಲ : ಹನ್ನೆರಡನೆಯ ಶತಮಾನ
ದೊರಕಿರುವ ವಚನಗಳು: 434 (ಆಧಾರ: ಸಮಗ್ರ ವಚನ ಸಂಪುಟ)
ತಂದೆ/ತಾಯಿ : ನಿರ್ಮಲಶೆಟ್ಟಿ ಮತ್ತು ಸುಮತಿ
ಹುಟ್ಟಿದ ಸ್ಥಳ :
ಪರಿಚಯ:
ಹನ್ನೆರಡನೆಯ ಶತಮಾನದಲ್ಲಿದ್ದ ಅಕ್ಕಮಹಾದೇವಿ, ನಿರ್ಮಲಶೆಟ್ಟಿ ಮತ್ತು
ಸುಮತಿಯರ ಮಗಳು. ತಂದೆ ತಾಯಿಯರ ಹೆಸರು ಕವಿ ಕಲ್ಪನೆ ಇದ್ದೀತು ಅನ್ನುವುದು ಕೆಲವು
ವಿದ್ವಾಂಸರ ಅನುಮಾನ. ಹರಿಹರನ ಮಹದೇವಿಯಕ್ಕಗಳ ರಗಳೆಯ ಪ್ರಕಾರ ಊರಿನ ಮುಖ್ಯಸ್ಥ ಕೌಶಿಕ
ಮಹದೇವಿಯನ್ನು ಮದುವೆಯಾಗಲು ಬಯಸಿ ಒತ್ತಾಯಿಸಿದ. ಅಕ್ಕ ಶರತ್ತುಗಳನ್ನು ವಿಧಿಸಿ ಮದುವೆಗೆ
ಒಪ್ಪಿದರೂ ಕೌಶಿಕ ವಚನ ಭಂಗ ಮಾಡಿದಾಗ ಉಡುಗೆಯನ್ನೂ ತೊರೆದು ಮನೆ ಬಿಟ್ಟು
ಹೊರಟುಬಿಡುತ್ತಾಳೆ. ಇನ್ನು ಕೆಲವು ಕಥನಪರಂಪರೆಗಳಲ್ಲಿ ಅಕ್ಕ ಎಳವೆಯಲ್ಲೇ
ಚನ್ನಮಲ್ಲಿಕಾರ್ಜುನನನ್ನು ವರಿಸಿದವಳು ಅನ್ನುವುದೂ ಉಂಟು. ಉರಕ್ಕೆ ಜವ್ವನಗಳು ಬಾರದ
ಮುನ್ನ ಎಂದು ಆರಂಭವಾಗುವ ಅಕ್ಕನ ವಚನ ನೋಡಿ. ಪರ್ಯಟನೆ ಮಾಡುತ್ತ ಮಹದೇವಿ ಕಲ್ಯಾಣಕ್ಕೆ
ಹೋದಳು, ಅಲ್ಲಿಂದ ಶ್ರೀಶೈಲದ ಕದಳಿಯಲ್ಲಿ ಐಕ್ಯಳಾದಳು ಎಂಬ ವಿವರಗಳಿವೆ. ಅಲ್ಲಮ ಮತ್ತು
ಅಕ್ಕಮಹಾದೇವಿ ಒಂದೇ ಪ್ರಾಂತದವರು, ಅವರ ಬದುಕಿನ ಕಥೆಗಳಲ್ಲೂ ವೈಚಾರಿಕ ನಿಲುವುಗಳಲ್ಲೂ
ಅನೇಕ ಸಾಮ್ಯಗಳಿವೆ. ಈಕೆಯ 434 ವಚನಗಳು ಮತ್ತು ಹಲವು ಹಾಡುಗಳು ದೊರೆತಿವೆ. ಯೋಗಾಂಗ
ತ್ರಿವಿಧಿ, ಸೃಷ್ಟಿಯ ವಚನ ಮತ್ತು ಮಂತ್ರಗೋಪ್ಯ ಮಹಾದೇವಿಯ ಇತರ ಕೃತಿಗಳು ಎಂದು
ಹೇಳುವುದುಂಟು. ಆದರೆ ಇವುಗಳ ರಚನೆಯನ್ನು ನೋಡಿದರೆ ವಚನಗಳನ್ನು ಸೃಷ್ಟಿಸಿದ ಮನಸ್ಸೇ ಈ
ಕೃತಿಗಳನ್ನೂ ರಚಿಸಿತು ಎಂದು ನಂಬುವುದು ಕಷ್ಟವಾಗುವಂತಿದೆ. ಭಾವಗಳ ತೀವ್ರತೆ ಈಕೆಯ
ರಚನೆಗಳ ಮುಖ್ಯ ಲಕ್ಷಣ.
ಬಸವಣ್ಣನ ಭಕ್ತಿ, ಚೆನ್ನಬಸವಣ್ಣನ ಜ್ಞಾನ,
ಮಡಿವಾಳಯ್ಯನ ನಿಷ್ಠೆ, ಪ್ರಭುದೇವರ ಜಂಗಮಸ್ಥಲ,
ಅಜಗಣ್ಣನ ಐಕ್ಯಸ್ಥಲ, ನಿಜಗುಣನ ಆರೂಢಸ್ಥಲ,
ಸಿದ್ಭರಾಮಯ್ಯನ ಸಮಾಧಿಸ್ಥಲ.
ಇಂತಿವರ ಕರುಣಪ್ರಸಾದ ಎನಗಾಯಿತ್ತು ಚೆನ್ನಮಲ್ಲಿಕಾರ್ಜುನಯ್ಯಾ.
--- ಅಕ್ಕಮಹಾದೇವಿ
Labels:
ವಚನ
ನಾನು ಒಬ್ಬ ಕನ್ನಡ ಪ್ರೇಮಿ,
ಕನ್ನಡವನ್ನು ಎಲ್ಲೆಡೆ ಕಾಣುವ ಬಯಕೆ....
ಜೈ ಕನ್ನಡಾಂಬೆ....
ಬುಧವಾರ, ಜೂನ್ 25, 2014
ಗಿಳಿ
ನೋಡಿ ಕಲಿವ ಗಿಳಿ
ಹಸಿರು ಬಣ್ಣದ ಕೆಂಪು ಕೊಕ್ಕಿನ ಮಾತಾಡುವ ಗಿಳಿಯ ಗೊಂಬೆಯನ್ನು ನೀವು ನೋಡಿರಬಹುದು. ನೀವು ಕತ್ತೆಯೆಂದರೆ ಅವೂ ಕತ್ತೆ ಎನ್ನುತ್ತವೆ. ನೀವು ಜಾಣ ಎಂದರೆ ಅವೂ ಜಾಣ ಎನ್ನುತ್ತವೆ. ಆದರೆ ನಿಜವಾಗಿಯೂ ಗಿಣಿಗಳು ಕಲಿಸಿದ ಭಾಷೆ ಕಲಿಯುತ್ತವೆ ಎಂಬುದು ನಿಮಗೆ ಗೊತ್ತೇ? ಆದರೆ ಕೆಲವು ಪದಗಳು ಮಾತ್ರ.ಅತ್ಯಂತ ಬುದ್ಧಿವಂತ ಪಕ್ಷಿಗಳಾದ ಗಿಳಿಗಳು ನೀವು ಕಲಿಸಿದರೆ ಲೆಕ್ಕ ಮಾಡಬಲ್ಲವು, ವಸ್ತುಗಳನ್ನು ಗುರುತಿಸಬಲ್ಲವು, ಮನುಷ್ಯರ ಹೆಸರು ನೆನಪಿಟ್ಟು ಕೂಗಬಲ್ಲವು. ಸುಮಾರು 2 ವರ್ಷದ ಮಗುವಿಗೆ ಇರಬಹುದಾದಷ್ಟು ನೆನಪಿನ ಶಕ್ತಿ ಮತ್ತು ಬುದ್ಧಿವಂತಿಕೆ ಗಿಳಿಗಳಿಗಿರುತ್ತದೆ! ಇವು ಊಟವನ್ನು ತಮ್ಮ ಕಾಲಿನಲ್ಲೆತ್ತಿ ಬಾಯಿಗಿಡುವ ಏಕೈಕ ಪಕ್ಷಿಜಾತಿ.
Labels:
ಪರಿಸರ ತಿಳಿ
ನಾನು ಒಬ್ಬ ಕನ್ನಡ ಪ್ರೇಮಿ,
ಕನ್ನಡವನ್ನು ಎಲ್ಲೆಡೆ ಕಾಣುವ ಬಯಕೆ....
ಜೈ ಕನ್ನಡಾಂಬೆ....
ಮಂಗಳವಾರ, ಜೂನ್ 24, 2014
ಅಭ್ದಿ
ಶತಾಬ್ದವನ್ನು ದಾಟಿದವರಿಂದಲೂ ದಾಟಲಾಗದ್ದು
ಹಸ್ತಸಾಮುದ್ರಿಕ ನೋಡುವ ಜ್ಯೋತಿಷಿಗಳಿಂದಲೂ ಹೇಳಲಾಗದಷ್ಟು ವಿಸ್ತೀರ್ಣದ 'ಸಮುದ್ರ'
ಅಪಾರ 'ಅಕೂಪಾರ'
ಪರಿವಾರವನ್ನೆಲ್ಲ ತೊರೆದ ಪರಿವ್ರಾಜಕ ದಾಟಬಾರದ 'ಪಾರಾವಾರ'
ಸರಸರನೇ ಹರಿದು ಹೋಗುವ ನದಿಗಳ ರಾಜ ಈ 'ಸರಿತ್ ಪತಿ'
ಉಧೋ ಉಧೋ ಎಂದು ಶಬ್ದಗರೆಯುತ್ತಾ ದಧಿಯಂಥ ನೊರೆಯನ್ನು ಹೊರಹಾಕುವ 'ಉದಧಿ'
ಸಿಂಧೂ ಬಯಲಿನ ನಾಗರೀಕತೆಗಿಂತಲೂ ಮುಂಚೆಯೇ ಹಿಂದೂಸ್ಥಾನವನ್ನು ಸುತ್ತುವರಿದಿದ್ದ 'ಸಿಂಧು'
ಇದರ ವೈಶಾಲ್ಯವ ಈಕ್ಷಿಸಿದವನಿಗೆ ಗರ ಬಡಿಸುವ 'ಸಾಗರ'
ಅರುಣನಿಂದ ಹೊಡೆತ ತಿಂದ ಹನೂಮಾನ್ ಹಾರಿದ 'ಅರ್ಣವ'
ರತ್ನ, ವೈಢೂರ್ಯಗಳನ್ನೆಲ್ಲ ತನ್ನ ಗರ್ಭದಲ್ಲಿ ಧರಿಸಿರುವ 'ರತ್ನಾಕರ'
Labels:
ಪದದ ಸುತ್ತ
ನಾನು ಒಬ್ಬ ಕನ್ನಡ ಪ್ರೇಮಿ,
ಕನ್ನಡವನ್ನು ಎಲ್ಲೆಡೆ ಕಾಣುವ ಬಯಕೆ....
ಜೈ ಕನ್ನಡಾಂಬೆ....
ಸೋಮವಾರ, ಜೂನ್ 23, 2014
ಕುವೆಂಪುರವರ ಜೀವನ
ಕುಪ್ಪಳ್ಳಿ ವೆಂಕಟಪ್ಪ ಗೌಡ ಪುಟ್ಟಪ್ಪ |
---|
ಕಾವ್ಯನಾಮ(ಗಳು): ಕುವೆಂಪು |
---|
ಜನನ: | ಡಿಸೆಂಬರ್ ೨೯, ೧೯೦೪ |
---|---|
ಜನನ ಸ್ಥಳ: | ಕುಪ್ಪಳ್ಳಿ, ತೀರ್ಥಹಳ್ಳಿ ತಾಲ್ಲೂಕು, ಶಿವಮೊಗ್ಗ ಜಿಲ್ಲೆ |
ನಿಧನ: | ನವೆಂಬರ್ ೧೧, ೧೯೯೪ ಮೈಸೂರು |
ವೃತ್ತಿ: | ಕವಿ, ಲೇಖಕ, ಪ್ರಾಧ್ಯಾಪಕ, ಪ್ರಾಂಶುಪಾಲ, ಕುಲಪತಿ |
ರಾಷ್ಟ್ರೀಯತೆ: | ಭಾರತೀಯ |
ಬರವಣಿಗೆಯ ಕಾಲ: | (ಮೊದಲ ಪ್ರಕಟಣೆಯಿಂದ ಕೊನೆಯ ಪ್ರಕಟನೆಯ ಕಾಲ) |
ಸಾಹಿತ್ಯದ ವಿಧ(ಗಳು): | ಕಥೆ, ಕವಿತೆ, ಕಾದಂಬರಿ, ನಾಟಕ, ವಿಮರ್ಶೆ, ಆತ್ಮ ಚರಿತ್ರೆ, ಜೀವನ ಚರಿತ್ರೆ, ಮಹಾಕಾವ್ಯ, ವೈಚಾರಿಕ ಸಾಹಿತ್ಯ |
ವಿಷಯಗಳು: | ಕರ್ನಾಟಕ, ರಾಮಾಯಣ, ಜೀವನ, ಶಿವಮೊಗ್ಗ |
ಸಾಹಿತ್ಯ ಶೈಲಿ: | ಬಂಡಾಯ, ನವೋದಯ |
ಪ್ರಥಮ ಕೃತಿ: | (ಮೊದಲ ಪ್ರಕಟಿತ ಕೃತಿ/ಗಳು) |
ಪ್ರಭಾವಗಳು: | ಕಾರ್ಲ್ ಮಾರ್ಕ್ಸ್, ಕುಮಾರವ್ಯಾಸ, ವರ್ಡ್ಸ್ ವರ್ತ್,ರಾಮಕೃಷ್ಣ ಪರಮಹಂಸ ಹಸ್ತಾಕ್ಷರ: |
ರಾಷ್ಟ್ರಕವಿ. ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ಕನ್ನಡದಪ್ರ
ಪ್ರಥಮ ವ್ಯಕ್ತಿ. 'ವಿಶ್ವ ಮಾನವ' ಪರಿಕಲ್ಪನೆಯನ್ನೂ ಸಾಹಿತ್ಯದ ಮೂಲಕ ಸಮಾಜಕ್ಕೆ
ತಲುಪಿಸಿದವರು. ಕನ್ನಡ ಸಾಹಿತ್ಯಕ್ಕೆ ಇವರ ಕಾಣಿಕೆ ಅಪಾರ. ಕುವೆಂಪುರವರ ವೊದಲ
ಕಾವ್ಯನಾಮ-"ಕಿಶೋರ ಚಂದ್ರವಾಣಿ" -ನಂತರ ಅವರು ಕುವೆಂಪು ಕಾವ್ಯನಾಮ ಬಳಸಿ ಬರೆಯ
ತೊಡಗಿದರು.
ಡಿಸೆಂಬರ್ ೨೯, ೧೯೦೪, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹಿರೇಕೊಡಿಗೆಯಲ್ಲಿ ಜನಿಸಿದ ಇವರು, ಕುಪ್ಪಳ್ಳಿ (ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲ್ಲೂಕು) ಹಾಗೂ ಮೈಸೂರಿನಲ್ಲಿ ಪರಪುಟ್ಟ ಹಕ್ಕಿಯಂತೆ ಬೆಳೆದರು. ಮೈಸೂರಿನ 'ಮಹಾರಾಜಾ' ಕಾಲೇಜಿನಲ್ಲಿ ಓದಿದ ಇವರು, ಮೈಸೂರು ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸಿ ಉಪ ಕುಲಪತಿಯಾಗಿ ನಿವೃತ್ತರಾದರು. ಇವರು ಮೈಸೂರಿನ ಒಂಟಿಕೊಪ್ಪಲಿನಲ್ಲಿರುವ "ಉದಯರವಿ"ಯಲ್ಲಿ ವಾಸಿಸುತ್ತಿದ್ದರು. ಇವರ ಹೆಂಡತಿಯ ಹೆಸರು ಹೇಮಾವತಿ ಮತ್ತು ಇವರಿಗೆ ನಾಲ್ಕು ಜನ ಮಕ್ಕಳು(ಪೂರ್ಣಚಂದ್ರ ತೇಜಸ್ವಿ, ಕೋಕಿಲೋದಯ ಚೈತ್ರ, ಇಂದುಕಲಾ, ತಾರಿಣಿ ಚಿದಾನಂದ). ಪ್ರಶಸ್ತಿ ಪುರಸ್ಕಾರಗಳು
ಜೀವನ ಚರಿತ್ರೆ:
|
Labels:
ಚರಿತ್ರೆ
ನಾನು ಒಬ್ಬ ಕನ್ನಡ ಪ್ರೇಮಿ,
ಕನ್ನಡವನ್ನು ಎಲ್ಲೆಡೆ ಕಾಣುವ ಬಯಕೆ....
ಜೈ ಕನ್ನಡಾಂಬೆ....
ಭಾನುವಾರ, ಜೂನ್ 22, 2014
ಅಮ್ಮ ನೀನು
*. . . ಆದಿಪ್ರಿಯ . . .*
Labels:
ಅಮ್ಮ
ನಾನು ಒಬ್ಬ ಕನ್ನಡ ಪ್ರೇಮಿ,
ಕನ್ನಡವನ್ನು ಎಲ್ಲೆಡೆ ಕಾಣುವ ಬಯಕೆ....
ಜೈ ಕನ್ನಡಾಂಬೆ....
ಬುಧವಾರ, ಜೂನ್ 11, 2014
TET Admit Card (Hall Ticket) 2014 (ಟಿ.ಇ.ಟಿ ಪರೀಕ್ಷೆ 2014 )
Karnataka Teachers Eligibility Test - 2014
Click Here To View Prospectus, Instructions, Broucher, Key Dates, Syllabus, Reply To Newspaper Statement, FAQ
NOTES :
Date of Examination KARTET-2014 postponed to 22/06/2014
Instructions to Candidates
Provision for downloading the Admission ticket for KAR TET Examination 2014 will be provided to the applicants from 10th Jun 2014 to 17th Jun 2014
Click Here To Admission Ticket PDF
Labels:
ಸಂದೇಶ
ನಾನು ಒಬ್ಬ ಕನ್ನಡ ಪ್ರೇಮಿ,
ಕನ್ನಡವನ್ನು ಎಲ್ಲೆಡೆ ಕಾಣುವ ಬಯಕೆ....
ಜೈ ಕನ್ನಡಾಂಬೆ....
ಫೀಫಾ ಪುಟ್-ಬಾಲ್ 2014 ( FIFA )
ಫೀಫಾ ಪುಟ್-ಬಾಲ್ 2014 ರ ವಿಶ್ವಕಪ್ ಬ್ರೇಜಿಲ್ ವೇಳಾಪಟ್ಟಿ
Labels:
ಕ್ರೀಡೆ
ನಾನು ಒಬ್ಬ ಕನ್ನಡ ಪ್ರೇಮಿ,
ಕನ್ನಡವನ್ನು ಎಲ್ಲೆಡೆ ಕಾಣುವ ಬಯಕೆ....
ಜೈ ಕನ್ನಡಾಂಬೆ....
ತಾಣ ವೀಕ್ಷಿಸಿದವರು
10 ಜೂನ್ ರಂದು ತಾಣ ವೀಕ್ಷಿಸಿದವರು
- Tuesday, June 10 @ Suri, West Bengal
- Tuesday, June 10 @ India
- Tuesday, June 10 @ Gulbarga, Karnataka
- Tuesday, June 10 @ Mangalore, Karnataka
- Tuesday, June 10 @ 5:04 : Bijapur, IN
- Tuesday, June 10 @ 2:00 : Gabrovo, BG
- Tuesday, June 10 @ 19:02 : Bangalore, IN
- Tuesday, June 10 @ 17:04 : Bijapur, IN
- Tuesday, June 10 @ 14:00 : Gabrovo, BG
- Tuesday, June 10 @ 12:19 : Princeton, New Jersey, US
- Tuesday, June 10 @ 12:19 : Saint Robert, Missouri, US
- Tuesday, June 10 @ 12:19 : Menlo Park, California, US
- Tuesday, June 10 @ 12:18 : Belgaum, IN
ಭಾನುವಾರ, ಜೂನ್ 08, 2014
ತಾಣದ ಹುಟ್ಟು ಹಬ್ಬ
ಈ ತಾಣ 3 ನೇ ವರ್ಷದ ಹುಟ್ಟು ಹಬ್ಬ.
ಇದೇ ತಿಂಗಳು 10 ಜೂನ್ 2014 ರಂದು ಇದೆ.
ಅಂದು ನನ್ನ ತಾಣ ವೀಕ್ಷಿಸುವವರು ಯಾರು ?
ಹಾಗೂ
ಯಾವ ಸಮಯ ?
ಎಂದು ಮರುದಿನ ಈ ತಾಣದಲ್ಲಿ ಪ್ರಕಟಿಸುವೆನು. (ಇಂಟರ್ ನೇಟ್ ಸಂಪರ್ಕದ ಪ್ರಕಾರ )
25 ನೇ ದಿನದಿಂದ 30 ದಿನಗಳಿಗೆ 30 ವಿಧದ ಸುದ್ದಿ ನಿಮ್ಮ ಕನ್ನಡದ ಕಂದ www.spn3187.blogspot.in ದಲ್ಲಿ ಲಭ್ಯವಾಗುವದು.
ಇದೇ ತಿಂಗಳು 10 ಜೂನ್ 2014 ರಂದು ಇದೆ.
ಅಂದು ನನ್ನ ತಾಣ ವೀಕ್ಷಿಸುವವರು ಯಾರು ?
ಹಾಗೂ
ಯಾವ ಸಮಯ ?
ಎಂದು ಮರುದಿನ ಈ ತಾಣದಲ್ಲಿ ಪ್ರಕಟಿಸುವೆನು. (ಇಂಟರ್ ನೇಟ್ ಸಂಪರ್ಕದ ಪ್ರಕಾರ )
25 ನೇ ದಿನದಿಂದ 30 ದಿನಗಳಿಗೆ 30 ವಿಧದ ಸುದ್ದಿ ನಿಮ್ಮ ಕನ್ನಡದ ಕಂದ www.spn3187.blogspot.in ದಲ್ಲಿ ಲಭ್ಯವಾಗುವದು.
Labels:
ಹಬ್ಬ
ನಾನು ಒಬ್ಬ ಕನ್ನಡ ಪ್ರೇಮಿ,
ಕನ್ನಡವನ್ನು ಎಲ್ಲೆಡೆ ಕಾಣುವ ಬಯಕೆ....
ಜೈ ಕನ್ನಡಾಂಬೆ....
ಗುರುವಾರ, ಜೂನ್ 05, 2014
ಪರಿಸರ ಸಂರಕ್ಷಣೆ
ಪರಿಸರ ನಾಶವಾದರೆ ಮನುಷ್ಯ ನಾಶವಾದಂತೆ. ಆದ್ದರಿಂ ದ ಎಲ್ಲರೂ ಪರಿಸರ ಸಂರಕ್ಷಣೆಗೆ ಪ್ರತಿ ವರ್ಷ ಒಂದೊಂದು ಸಸಿ ನೆಟ್ಟಿದ್ದರೆ ಇಡೀ ರಾಜ್ಯದಲ್ಲಿ 6 ಕೋಟಿ+ ಸಸಿಗಳನ್ನು ಬೆಳೆಸಿದಂತಾಗುತ್ತದೆ ಎಂದು ಜಿಲ್ಲಾ ವಿಜ್ಞಾನ ಕೇಂದ್ರದ ಕಾರ್ಯದರ್ಶಿ ದಾನಿ ಬಾಬುರಾವ ನುಡಿದರು.
ವಿಶ್ವದ ಜೀವ ವೈವಿಧ್ಯದ ಸಂರಕ್ಷಣೆ, ಪರಿಸರ ಸಂಬಂಧಿ ಸಮಸ್ಯೆಗಳನ್ನು ಪತ್ತೆಹಚ್ಚುವುದು ಹಾಗೂ ಅವುಗಳನ್ನು ಸರಿಪಡಿಸುವ ಮಾರ್ಗೋಪಾಯಗಳನ್ನು ಕಂಡು ಹಿಡಿಯುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಯತ್ನವಾಗಿ ಪ್ರತಿವರ್ಷ ಜೂನ್ 5 ರಂದು ‘ವಿಶ್ವ ಪರಿಸರ ದಿನ'ವನ್ನು ಆಚರಿಸಲಾಗುತ್ತದೆ. ಇದು ನಮ್ಮ ಸದ್ಯದ ಸ್ಥಿತಿ. ದಿನೇ ದಿನೇ ನಮ್ಮ ಅನುಕೂಲತೆಗೆ ತಕ್ಕಂತೆ ಜೀವನ ಸಾಗಿಸುತ್ತಿರುವ ನಾವುಗಳು ಪರಿಸರದ ಬಗ್ಗೆಯೂ ಒಂದಿಷ್ಟು ಗಮನ ಹರಿಸಬೇಕಾದ ಅಗತ್ಯತೆ ಇಂದು ಹೆಚ್ಚಾಗಿಯೇ ಇದೆ. ಪರಿಸರ ಉಳಿವಿಗಾಗಿ ಜನಜಾಗೃತಿ ಮೂಡಿಸಲು ಪ್ರಯತ್ನಗಳು ಪ್ರತೀವರ್ಷ ಈ ದಿನದಂದು ನಡೆಯುತ್ತವೆ. ಮಾರನೆಯ ದಿನ ಎಲ್ಲರೂ ತಮ್ಮ-ತಮ್ಮ ಕೆಲಸದಲ್ಲಿ ಬ್ಯುಸಿಯಾಗಿ ಬಿಡುತ್ತೇವೆ. ದೊಡ್ಡ-ದೊಡ್ಡ ಗಿಡವನ್ನು ರೋಡ್ ವಿಸ್ತಾರ ಮಾಡಲೆಂದು ಕತ್ತರಿಸಿ ಉರುಳಿಸುವಾಗ ರೋಡ್ ಅಗಲವಾದರೆ ನನ್ನ ಗಾಡಿ ಸರಾಗವಾಗಿ ಹೋಗಬಹುದೆಂದು ಮನದಲ್ಲಿಯೇ ಖುಷಿ ಪಡುತ್ತಾ ಮೂಖರಂತೆ ನಿಂತು ನೋಡುತ್ತೇವೆ.
ಒಂದು ದೇಶ ಆರ್ಥಿಕವಾಗಿ ಬೆಳೆಯಲು, ಜನರ ಅವಶ್ಯಕತೆಗಳನ್ನು ಪೂರೈಸಲು ಕೈಗಾರಿಕೆಗಳು ಬೇಕು. ಆದರೆ ಇವುಗಳು ಪರಿಸರಕ್ಕೆ ಅಷ್ಟೇ ಮಾರಕ. ಕೈಗಾರಿಕೆಗಳು ಇಲ್ಲದೆ ಜೀವನ ಊಹಿಸಲು ಸಾಧ್ಯವಿಲ್ಲ, ಪರಿಸರ ಹಾಳಾದರೆ ಬದುಕುವುದು ಕಷ್ಟ. ಆದ್ದರಿಂದ ಕೈಗಾರಿಕೆಗಳ ತ್ಯಾಜ್ಯ ವಸ್ತುವನ್ನು ಸರಿಯಾಗಿ ವಿಲೇವಾರಿ ಮಾಡುವುದೇ ಸ್ವಲ್ಪ ಮಟ್ಟಿಗೆ ಪರಿಸರ ರಕ್ಷಣೆಗೆ ನಾವು ಕೊಡುವ ಕಾಣಿಕೆ. ಒಂದು ವೇಳೆ ಕಾರ್ಖಾನೆಗಳು ಈ ಕೆಲಸದಲ್ಲಿ ಎಡವಿದರೆ ಇದರ ವಿರುದ್ಧ ಧ್ವನಿ ಎತ್ತುವುದು ಪ್ರತಿಯೊಬ್ಬ ಜನ ಸಾಮಾನ್ಯನ ಕರ್ತವ್ಯ. ಇಷ್ಟು ಸಾಲದು ಎಂಬಂತೆ ನಗರ ಪ್ರದೇಶದ ಕೆಲವು ಕಡೆಗಳಲ್ಲಿ ಕಸ ವಿಲೇವಾರಿ ಸರಿಯಾಗಿ ಆಗುತ್ತಿಲ್ಲ. ಇದರ ಪರಿಣಾಮ ಸುಂದರ ಪರಿಸರ ಕಸದಿಂದ ತುಂಬಿ ತುಳುಕುತ್ತಿದೆ. ಇದಕ್ಕೆ ಮುನ್ಸಿಪಾಲಿಟಿಯವರು ಮಾತ್ರವಲ್ಲ, ಕಸವನ್ನು ಕಂಡ-ಕಂಡಲ್ಲಿ ಹಾಕುವ ಜನಸಾಮಾನ್ಯ ಮೊದಲ ತಪ್ಪಿತಸ್ಥ. ಪ್ಲಾಸ್ಟಿಕ್ ಮಣ್ಣಿನಲ್ಲಿ ಕೊಳೆಯಲು ತುಂಬಾ ಸಮಯ ತೆಗೆದುಕೊಳ್ಳುತ್ತದೆ, ಇದರಿಂದಾಗಿ ಮಳೆ ನೀರು ಭೂಮಿನಲ್ಲಿ ಇಂಗುವುದಿಲ್ಲ, ಎಲ್ಲಾ ಗೊತ್ತಿದ್ದರೂ ಪ್ಲಾಸ್ಟಿಕ್ ಬಳಸುತ್ತಿದ್ದೇವೆ.
ಸ್ವಲ್ಪ ಪೇಪರ್ ರೀತಿಯ ಪ್ಲಾಸ್ಟಿಕ್ ಬಂದಿದೆಯಾದರೂ ಯಾವುದೇ ಪ್ಲಾಸ್ಟಿಕ್ ಆಗಿರಲಿ ಅದು ಪರಿಸರಕ್ಕೆ ಹಾನಿಕಾರವೇ. ಪರಿಸರ ಮಾಲಿನ್ಯಕ್ಕೆ ನಮ್ಮ ಅನಿವಾರ್ಯ ಕೊಡುಗೆಗಳಿವು! ಜಗತ್ತಿನಲ್ಲಿ ಉತ್ಪಾದಿತ ಆಹಾರದಲ್ಲಿ ಶೇ. 50ರಷ್ಟು ಮನುಷ್ಯನ ಹೊಟ್ಟೆ ಸೇರುವ ಮೊದಲೇ ವ್ಯರ್ಥವಾಗುತ್ತಿದೆ. ಈ ಹಿನ್ನೆಲೆಯಲ್ಲಿ ನೀರಿನ ಸದ್ಭಳಕೆ, ಆಹಾರದ ಸದುಪಯೋಗದ ಚಿಂತನೆ ಅಗತ್ಯ. ಇದು ಹಸಿದವರಿಗೆ, ಮುಂದಿನ ಪೀಳಿಗೆಗೆ ನಾವು-ನೀವು ನೀಡಬಹುದಾದ ದೊಡ್ಡ ಕೊಡುಗೆ. ಒಂದು ಸಮೀಕ್ಷೆಯ ಪ್ರಕಾರ ಭಾರತೀಯರು ತಿನ್ನುವುದಕ್ಕಿಂತಲೂ ಆಹಾರ-ನೀರು ವ್ಯರ್ಥ ಮಾಡುವುದೇ ಹೆಚ್ಚು. ಜಗತ್ತಿನ 700+ ಕೋಟಿ ಜನಸಂಖ್ಯೆ 2050 ರಲ್ಲಿ 900+ ಕೋಟಿಗೇರಲಿದೆ. ಆದರೆ ಭೂಮಿ ಮಾತ್ರ ಒಂದಿಷ್ಟೂ ಹೆಚ್ಚದು. ಹೀಗಾಗಿ ಆಹಾರ, ನೀರು ವ್ಯರ್ಥ ಮಾಡೋದು ಮುಂದಿನ ಜನಾಂಗದ ತುತ್ತು-ಜಲ ಕಸಿದಂತೆ. ಹೀಗೆ ನಡೆದರೆ ನಮ್ಮ ದೈನಂದಿನ ಬದುಕು ಸಮಾಜಕ್ಕೆ, ಸರಕಾರಕ್ಕೂ ಹೊರೆಯಾಗಲಿದೆ, ಪರಿಸರಕ್ಕೆ ಮಾರಕವಾಗಲಿದೆ. ಗಿಡ ನೆಟ್ಟು, ಭಾಷಣ ಬಿಗಿಯುವ ಬದಲು ನೆಡುವ ಗಿಡಗಳನ್ನು ಪೋಷಿಸುವ ಕೆಲಸ ಮಾಡೋಣ. ಇರುವ ಸಂಪನ್ಮೂಲಗಳನ್ನು ವಿತವಾಗಿ ಬಳಕೆ ಮಾಡುವ ಕುರಿತು ಯೋಚಿಸೋಣ ಏನಂತಿರಾ?
Labels:
ಸಂದೇಶ
ನಾನು ಒಬ್ಬ ಕನ್ನಡ ಪ್ರೇಮಿ,
ಕನ್ನಡವನ್ನು ಎಲ್ಲೆಡೆ ಕಾಣುವ ಬಯಕೆ....
ಜೈ ಕನ್ನಡಾಂಬೆ....
ಭಾನುವಾರ, ಜೂನ್ 01, 2014
ಪುಟ್ಮಾದನ ಮದುವೆಯ ಹಾಸ್ಯ ಕಥೆ
ಭಾಷೆಯ ಬಳಕೆ ಗ್ರಾಮ್ಯ ಭಾಷೆಯಲ್ಲಿದೆ ,
ಮಂಡ್ಯಾ ಭಾಷೆ ಬಲ್ಲವರಿಗೆ ಇದೊಂದು ಮಜಾ ಕೊಡುವ ಕಥೆಯಾಗುತ್ತದೆ
ಪುಟ್ಮಾದನ ಮದುವೆಯ ಹಾಸ್ಯ ಕಥೆ
"ಲೇ ಹೈದ ಬರಲೇ ಬೇಕು ಕನ್ಲಾ ಮನೆಗೆ ..... ಬರ್ನಿಲ್ಲಾ ಅಂದ್ರೆ ನೋಡು .......! "ಅಂತಾ ದಮಕಿ ಹಾಕ್ತಾ ಬಂದ ನಮ್ ಪುಟ್ಮಾದ .ಮನೆಯ ಮುಂದೆ ಅವನ ಬಿಳೀ ಮಾರುತಿ ಕಾರು ನನ್ನನ್ನು ನೋಡಿ ಕಣ್ ಹೊಡೆದು ಅಣಕಿಸುತ್ತಾ ನಿಂತಿತ್ತು,
ಓ ನಮ್ ಪುಟ್ಮಾದ ಯಪ್ಪಾ ನಿಮಗೆ ಗೊತ್ತಿಲ್ಲಾ......! ನಮ್ "ದುರಾಸೆಪುರದಲ್ಲಿಯೇ"
ಬಹಳ ವಿಚಿತ್ರಾ ಕಣ್ರೀ , ಬಹಳ ಒರಟ ,ನನ್ನ ಕ್ಲಾಸ್ ಮೆಟ್ಟು ...? , ಯಾತಕ್ಕೂ
ಹೆದರದ ಹುಂಬ . ಆದರೆ ಬೆನ್ನಿಗೆ ಬಿದ್ದ ಗೆಳೆಯ, ಮನೆಗೆ ಬಂದ. ಪುಟ್ಮಾದನನ್ನು
ಕಂಡೊಡನೆ ಅವನ ಮದುವೆಯ ಮಾತು ಕಥೆಯ ನೆನಪಾಯ್ತು.
ಹೂ ಕಣ್ರೀ ಅದು ಒಂತರಾ ವಿಚಿತ್ರ ಕಥೆ , ಅವತ್ತು ಹೀಗಾಯ್ತು , ನನ್ನ ಮನೆಯಲ್ಲಿ ವಿರಾಮವಾಗಿ ರಜೆಯ ಸವಿಯನ್ನು ಸವಿಯುತ್ತಿದ್ದೆ, "ಲೇ ಹೈದಾ ಏನ್ಲಾ ಬೊ ಪುರುಸೋತ್ತಾಗಿದ್ದೀ ...... ?" ಅಂತಾ ನಗು ನಗುತ್ತಾ ಎದುರು ನಿಂತಾ ಪುಟ್ಮಾದ .
"ಓ ಹೊ ಹೊ ಬಾರೈಯ್ಯಾ ಬಾ ಬಾ ಅಪರೂಪಕ್ಕೆ ಈ ಕಡೆ ನಮ್ ಮನೆಗೆ ಬಂದೆ ಬಾ ಬಾ" ಅಂತಾ ಸ್ವಾಗತಿಸಿದೆ .
ಲೇ ಅನಿಲ್ ಜಾಸ್ತಿ ಮಾತಾಡೋಕೆ ಪುರುಸೋತ್ತಿಲ್ಲಾ ಬ್ಯಾಗ ರೆಡಿ ಆಗು ಕಿತಾಪತಿ ಪುರಕ್ಕೆ ಹೋಗ್ಬೇಕು ಅಂತಾ ನನ್ನನ್ನು ಎಬ್ಬಿಸಿಕೊಂಡು ಹೊರಟ .
ದಾರಿಯಲ್ಲಿ ತಿಳಿದು ಬಂತು ಈ ಶತ ಒರಟ ಮದುವೆ ಆಗಲು ಹುಡುಗಿ ಹುಡುಕುತ್ತಿದ್ದು ,
ಅವತ್ತು ಒಬ್ಬರ ಸಹಾಯದಿಂದ ಒಂದು ಹುಡುಗಿ ನೋಡಲು ತೆರಳಿದ್ದ , ಜೊತೆಗೆ ನನ್ನನ್ನೂ
ಬಲವಂತಾ ಮಾಡಿ ಕರೆದುಕೊಂಡು ಹೊರಟಿದ್ದಾ . ಇವನಿಗಿಂತಾ ಮೊದಲೇ ಅವನ ಅಪ್ಪಾ ಅಮ್ಮ
ಹೊರಟಿದ್ದರು , "ಕಿತಾಪತಿ ಪುರ" ತಲುಪಿದ ನಾವು , ಅವನ ಗೆಳೆಯರ ಮನೆಗೆ ತೆರಳಿ ಅವರ ಕುಟುಂಬದ ಜೊತೆ ಹುಡುಗಿಯ ಮನೆಗೆ ತೆರಳಿದೆವು. ಹುಡುಗನ ಅಪ್ಪಾ ಅಮ್ಮ ಆಗ್ಲೇ ಅಲ್ಲಿ ತಲುಪಿದ್ದರು
ಹುಡುಗಿಯ ಮನೆ ಹೊಕ್ಕ ನಮ್ಮನ್ನು ನಮ್ಮಿಬ್ಬರ ಎರಡೂ ಕುಟುಂಬವನ್ನು ಬಲ್ಲ ಒಬ್ಬರು
ಸ್ವಾಗತಿಸಿದರು . ಪರಸ್ಪರ ಪರಿಚಯ ಆಯ್ತು , ಮಾತುಕತೆ ಪ್ರಾರಂಭ ಆಯ್ತು.
ಹುಡುಗಿ ಅಪ್ಪಾ :-"ಏನ್ರಪ್ಪಾ ನಮ್ ಪ್ಯಾಮಿಲಿ ಎಲ್ಲಾ ನಿಮಗೆ ಗೊತ್ತು , ನಿಮ್
ಪ್ಯಾಮಿಲಿ ಇಚಾರ ಬಾಳ ಕೇಳಿವ್ನಿ , ಭಾರಿ ದೊಡ್ಡ ಕುಳ
ಅಂತಾ ಸರೀಕರು ಹೇಳವ್ರೆ ,ಈ ಮದ್ವೆ ಆಗ್ಬುಟ್ರೆ , ನಮ್ ಹೆಣ್ಣು
ಸಂದಾಕೆ ಇರಬೈದು ಅಂತಾ ಅನ್ಸದೆ , ಮಾತ್
ಮುಂದುವರ್ಸದೆ ಯೋಳ್ರಪ್ಪಾ ...?"
ಹುಡುಗನ ಅಪ್ಪಾ :- "ಅಯ್ಯೋ ಎಲ್ಲಿ ಭಾರಿ ಕುಳಾ ಅಂದೀರಿ ತಗಳಿ , ಯವಾರಾ
ಎಲ್ಲಾ ಡಲ್ ಆಯ್ತಾ ಅದೇ , ಇನ್ ಮ್ಯಾಕೆ ನಮ್ ಹೈದನೆ ಯವಾರ ನೋಡ್ಕಬೇಕು
ನಂಗೂ ಸಾಕಾಗೋಗದೆ , ನಮ್ ಹೈದಾ ನಿಮ್ ಮಗ್ಳಾ ಇನ್ನೂ ನ್ವಾಡೆ ಇಲ್ಲಾ , ಆಗ್ಲೇ ಮಾತು ಕತೆ ಅಂತೀರಲ್ಲಾ ? ಕರ್ಸಿ ಹೆಣ್ ಮೊಗವ , ನಾಮು ನೋಡುಮ ."
ಹುಡುಗಿ ಅಪ್ಪಾ :- ''ಊ ಅದೂ ಸರ್ಯೇ , ಲೇ ಯಾರಮ್ಮಿ ಒಳಗೆ ಕರ್ಕಾ ಬಮ್ಮಿ ಲಕ್ಸ್ಮಿಯ ಒರಾಕೆ'' ಅಂದ್ರು
.
ಹುಡುಗಿ ನಗು ನಗುತ್ತಾ ನಾಚುತ್ತಾ ಕೈಲಿ ಶರಬತ್ ಗ್ಲಾಸುಗಳ ತಟ್ಟೆ ಹಿಡಿದು ಬಂತು
, ಎಲ್ಲರಿಗೂ ತಲೆ ತಗ್ಗಿಕೊಂಡು ಶರಬತ್ ತುಂಬಿದ ಗ್ಲಾಸ್ ಗಳನ್ನ ನೀಡುತ್ತಾ
ಬರುತ್ತಿತ್ತು.
ಹುಡುಗಿ ಅಪ್ಪಾ :- "ಅವ್ವಾ ನಾಚ್ಕಾ ಬ್ಯಾಡ ಇವರೆಲ್ಲಾ ನಮ್ ಜನ್ಗಳೇ ,
ಇಲ್ಲವ್ರಲ್ಲಾ ದೊಡ್ಡವರು ಅವರಿಗೆ ಕೊಡು ತಾಯಿ, " ಅಂತಾ ಹೇಳಿ, ಮುತುವರ್ಜಿ ವಹಿಸಿ
ಮಗಳಿಗೆ ಧೈರ್ಯ ತುಂಬಿ ಎಲ್ಲರಿಗೂ ಶರಬತ್ ಕೊಡಿಸಿದರು, ಶರಬತ್ ಕೊಟ್ಟ ಹುಡುಗಿ
ನಮ್ ಪುಟ್ಮಾದ ನ ಕಡೆ ಒಂದು ಕಿರು ನಗೆ ಬಿಸಾಕಿ ಒಳಗೆ ಹೋದಳು,
ನಮ್ ಪಕ್ಕಾ ಕುಳಿತಿದ್ದ ಪುಟ್ಮಾದ ಸಣ್ಣಗೆ ಕಂಪಿಸಿದ , ನಾನು ಯಾಕೋ ಪುಟ್ಮಾದ ಎನಾಯ್ತು ? ಹುಡುಗಿ ಚೆನ್ನಾಗಿದ್ದಾಳೆ ಅನ್ಸುತ್ತೆ ಒಪ್ಪಿಗೆನಾ ? ಅಂತಾ ಅವನ ಕಿವಿಯಲ್ಲಿ ಉಸುರಿದೆ , ಏನಿಲ್ಲಾ ಅಂತಾ ಮುಖ ಅರಳಿಸಿ ಅವಳು ಕೊಟ್ಟಾ ಶರಬತ್ ರುಚಿಯಲ್ಲಿ ಅವಳ ಚೆಲುವಿನ ಸವಿ ಸವಿಯುತ್ತಿದ್ದ .
ಸ್ವಲ್ಪ ಹೊತ್ತು ಅದು ಇದೂ ಮಳೆ ಬೆಲೆ ವಿಚಾರ ಮಾತಾಡಿದ ಎರಡೂ ಕಡೆಯವರು ಮುಖ್ಯ ವಿಚಾರಕ್ಕೆ ಬಂದರು,
ಹುಡ್ಗಿಯ ತಾಯಿ ಹೊರಬಂದು , ಒಸಿ ಬನ್ನಿ ಒಳಾಕೆ ಅಂತಾ ಹುಡುಗಿಯ
ಅಪ್ಪನನ್ನು ಮನೆಯ ಕೋಣೆಯೊಳಗೆ ಕರೆದು ಕೊಂಡು ಹೋದರು . ಸ್ವಲ್ಪ ಸಮಯದ ನಂತರ
ಹೊರಬಂದಾ ಇಬ್ಬರ ಮುಖದಲ್ಲೂ ಹುಡುಗ ಒಪ್ಪಿಗೆಯಾದ ಬಗ್ಗೆ ಭಾವನೆ ವ್ಯಕ್ತವಾಗುತ್ತಿತ್ತು.
ಹುಡುಗಿಯ ಅಪ್ಪ :- "ಬಾಳಾ ಒತ್ತಾಯ್ತು , ನಮ್ ಹುಡ್ಗಿ , ಬಗ್ಗೆ ಏನೂ ಯೋಳಲೇ
ಇಲ್ಲಾ ನೀವೆಲ್ಲಾ , ನಮ್ಗೆ ನಿಮ್ ಹುಡುಗ ಒಪ್ಗೆ ಆಗವ್ನೆ , ಏನ್ರಪ್ಪಾ ಒಪ್ಪಿಗೆಯ
ನಿಮಗೆ ಈ ಸಂಬಂಧ , ಊ ಅನ್ನೋದಾದ್ರೆ ಮುಂದುವರ್ಸಿ ಮಾತಾಡುಮಾ ," ಏನನ್ದೀರಿ? ಅಂದ್ರು
.
ಹುಡುಗನ ಅಪ್ಪಾ :- "ಓ ಇದಾ ಇಸ್ಯಾ , ಏನ್ಲಾ ಮೊಗ ಹುಡುಗಿ ನಿಂಗೆ ಒಪ್ಪಿಗೆಯಾ ? "ಯೋಳ್ಲಾ ಅಂದ್ರ್ರೂ,
ಪುಟ್ಮಾದ :- ನನ್ದೆನದೇ ಎಲ್ಲಾ ದೊಡ್ಡವರು ನೀಮೆ ಇದ್ದೀರಲ್ಲಾ , ನಿಮಗೆ ಒಪ್ಗೆ ಆಗಿದ್ರೆ , ನಂಗೂ ಒಪ್ಪಿಗೆಯಾ ಅಂದಾ ,
ಹುಡುಗನ ಅಪ್ಪಾ:- "ಲೇ ಮದುವೇ ಆಗಿ ಸಂಸಾರ ಮಾಡೋವ್ನು ನೀನು ಕನ್ಲಾ ," "
ಸರ್ಯಾಗಿ ಯೋಳೋ ಐವಾನ್ ", ಅಂದ್ರೂ
ನನ್ನ ಕಡೆ ತಿರುಗಿ , ಒಸಿ ಆಚೆ ನಮ್ ಹೈದನ ಆಚೆ ಕರ್ಕಂಡು ಓಗಿ ಕೇಳಪ್ಪಾ ,
ನೀನೆ ಸರಿ ಇವನ ದಾರಿಗೆ ತರೋಕೆ , ಅಂದು ಇಬ್ಬರನ್ನು ಮನೆಯ ಹೊರಗೆ ಕಳುಹಿಸಿದರು
ನಾನು:- "ಲೇ ಪುಟ್ಮಾದ ಹುಡುಗಿ ಒಪ್ಪಿಗೆ ಏನೋ ? " ಅಂದೇ
ಪುಟ್ಮಾದ :- "ಊ ಗುರು, ಉಡ್ಗಿ , ಸಂದಾಗ್ ಅವ್ಳೇ ",
"ಒಸಿ ನೋಡೂಕೆ ಸಿನ್ಮಾ ಆರ್ತಿ ಕಂಡಂಗ್ ಆಯ್ತಾ ಅದೇ"
ಅಂತಾ ಜೊಲ್ಲು ಸುರುಸಿದ.
ನಾನು :- ಸರಿ ಹಾಗಿದ್ರೆ , ಒಪ್ಪಿಗೆ ಅಂತಾ ಹೇಳೋಣ ಬಾ , ಅಂದೇ .
ಪುಟ್ಮಾದ :- ಲೇ ಇರೋ ಒಸಿ , ಮದುವೇಲಿ ಎನ್ಕೊಡ್ತಾರೆ , ಅಂತಾ ತಿಳ್ಕಂಡು ,
ಆಮ್ಯಾಕೆ ಒಪ್ಗೆ ಅಂತಾ ಯೋಳುಮ . ನಮ್ ಅಪ್ಪನ ಕರಿ ,
ಮಾತಾಡ್ಬೇಕೂ ಅಂದಾ
ನಾನು ಹೋಗಿ ಹುಡುಗನ ಅಪ್ಪನನ್ನು ಕರೆದುಕೊಂಡು ಬನ್ದೆ. ಏನ್ಲಾ ನಿಂದು ತಕರಾರು ಲೇ , ಅಂತಾನೆ ಬಂದ್ರು ,
ಪುಟ್ಮಾದ :- ಅಪ್ಪವ್ , ಒಪ್ಕಂಡ್ಬುಟ್ಟಾ ನೀನು ? ಏನ್ ಕೊಟ್ಟಾರಂತೆ , ? ಈಗಲೇ
ಯೋಳ್ತೀನಿ , ನಂಗೆ ಮಾರುತಿ ಕಾರ್ ಕೊಡ್ಸುಕೆ ಯೋಳು , ನೀನಾದ್ರೂ
ತಕೊಡ್ಲಿಲ್ಲ , ಇಂಗಾದ್ರೂ ಬರ್ಲಿ ಅನ್ದಾ.
ಪಕ್ಕದಲ್ಲಿ ಇದ್ದ ನನಗೆ ಇವನ ಮಾತು ಕೇಳಿ ಸುಸ್ತಾಯ್ತು , ಇವನಿಗೆ ನೆಟ್ಗೆ ಮೋಟಾರ್
ಬೈಕ್ ಓದ್ಸೋಕೆ ಬರ್ತಿರ್ಲಿಲ್ಲಾ , ಇನ್ನು ಹುಡುಗಿ ಜೊತೆ ಹೊಸ ಕಾರ್ ಕೊಟ್ರೆ ,
ಹುಡುಗಿ ಕಥೆ ? ಅಂತಾ ಅನ್ನಿಸಿ , ದಿಕ್ಕು ತೋಚದಂತೆ ಆಯಿತು.
ಹುಡುಗನ ಅಪ್ಪಾ ಮಗನ ಬೇಡಿಕೆಗೆ ನಸು ನಕ್ಕು , ನಂ ಮಗ ದಾರೆ ಮಂಟಪದಲ್ಲಿ ತಾಳಿ ಕಟ್ಟುವಾಗ ಮದುವೆಮನೆ ಮುಂದೆ ಸೋರೂಂ ಕಾರು ನಿಂತಿರ್ಬೇಕೂ ಅಂತೀನಿ ಕನ್ಲಾ ಮಗ ನಡಿ ಬಿರಬಿರನೆ , ಅಂತಾ ಹುಡುಗಿಯ ಮನೆಯ ಒಳಗೆ ನಮ್ಮನ್ನೆಲ್ಲಾ ಕರೆದುಕೊಂಡು ಹೊದ್ರು. ನಾನು ಏನೂ ಅರ್ಥವಾಗದವನಂತೆ ಪೆಚಾಗಿ ಮನೆಯ ಒಳಗೆ ನಡೆದೇ .
ಮಾತುಕತೆ ಶುರು ಆಯ್ತು, ನಮ್ ಐದಾ ಎಂ . ಎ . ಪಾಸ್ ಮಾಡವ್ನೆ , ಮನೆಹಾಳ್ ಪುರ
ದಲ್ಲಿ , ನಾಮೂವೆ ಅವನನ್ನ ದೊಡ್ ಕಾಲೇಜ್ಗೆ ಹಾಕಿ ಓದುಸ್ದೋ , ಅಲ್ಲೂ ಬಾಳ
ಒಳ್ಳೆ ಎಸ್ರು ತಗಂಡಾ , ಈಗ ನಮ್ ಯವಾರ ನೋಡ್ಕಳ್ಳೀ ಅಂತಾ , ನಾಮೇ ಕೆಲಸಕ್ ಬ್ಯಾಡ ಮಗಾ
ಅಂದೋ , ಅದ್ಯಾಕೋ ಕಾಣೆ ನಿಮ್ ಹುಡ್ಗಿ ನೋಡಿ ಒಪ್ಕಂದವ್ನೆ , ಬಾಳ ಉಡ್ಗಿರ್
ನೋಡಿದರೂ ಒಪ್ಪಿರ್ನಿಲ್ಲಾ , ನಿಮ್ ಉಡ್ಗಿ ನಸೀಬು ಚಂದಾಕದೆ , ಮಾತು ಕಥೆ ನಡೀಲಿ ಅನ್ನುತ್ತಾ ಪ್ರಸ್ಥಾಪ ಇಟ್ಟರು .
ಹುಡುಗಿ ಅಪ್ಪಾ , ಇನ್ನೇನು ಎಲ್ರುದೂ ಒಪ್ಗೆ ಅಂದಮ್ಯಾಕೆ , ಸುರು ಮಾಡುಮ ಮಾತುಕತೆ,
ಆದ್ರೆ ಉಡುಗ ಸರ್ಕಾರಿ ಕೆಲ್ಸಾ ಮಾಡ್ತಾ ಇಲ್ಲಾ ಅನ್ನೋದೇ ಒಸಿ ಬ್ಯಾಸರಾ , ನಮ್
ಹುಡುಗಿ ಚೆನ್ನಾಗಿ ಬಿ. ಎ . ಓದವಳೇ , ಮನೆಕೆಲ್ಸಾ ಎಲ್ಲಾ ಮಾಡ್ತಾಳೆ , ನಮ್
ಹಟ್ಟಿಗೆ ಲಕ್ಸ್ಮಿ ಇದ್ದಂಗೆ , ಇವಳು ಹುಟ್ಟಿದ್ ಮ್ಯಾಕೆ ನಮ್ ಯಾಪಾರ, ಯವಾರ
ಇನ್ನೂ ಜೋರಾಯ್ತು . ಸರ್ಕಾರಿ ಕೆಲ್ಸಾ ಇರೋ ಗಂಡ ಬೇಕೂ ಅಂತಿದ್ಲು , ಏನ್ ಮಾದುಮಾ ಈಗ
, ಒಳ್ಳೆ ಫಜೀತಿ ಆಯ್ತಲ್ಲಾ , ಅಂತಾ ತಲೆ ಕೆರೀತ , ಸರಿ ಬುಡಿ , ನಾಮೇ ನಮ್
ನೆಂಟ್ರು ಒಬ್ಬರು ಮಂತ್ರಿಯಾಗವ್ರೆ ಅವ್ರ್ತಾವು ಕೈ ಕಾಲ್ ಕಟ್ಟಿ ಕೆಲ್ಸಾ
ಕೊಡಿಸ್ತೀವಿ , ನಮ್ ಕೈಲಾದಂಗೆ ಚಿನ್ನಾ , ಬಣ್ಣಾ ಆಕಿ ಮರ್ಯಾದೆಗೆ ತಕ್ಕಂಗೆ
ಕಿತಾಪತಿ ಪುರದಲ್ಲಿ ಆ ಪುಟ್ಟಣ್ಣನವರ ದೊಡ್ಡ ಚತ್ರಾ ಅದಲ್ಲಾ , ಅದನೆ ಬುಕ್
ಮಾಡಿ ಮದುವೇ ಮಾಡಿಕೊಡ್ತೀವಿ ಬುಡಿ .
ನಮ್ಮ ಪುಟ್ಮಾದನ ಮುಖ ಬಿಳಿಚಿ ಕೊಂಡಿತು , ಪೆಚ್ಛಾಗ್ ಹ್ಯಾಪ ಮೊರೆ ಹಾಕಿಕೊಂಡು
ನಿಂತಾ , ಅವನ ಕನಸಿನ ಮಾರುತಿ ಕಾರಿನ ವಿಚಾರ ಬಂದಿರಲೇ ಇಲ್ಲಾ ಹುಡುಗಿಯ ಅಪ್ಪನ
ಬಾಯಲ್ಲಿ,
ಹುಡುಗನ ಅಪ್ಪಾ :- ಅಯ್ಯೋ ನಮ್ ಹುಡುಗ ಬಾಳ ಒದವ್ನೆ , ಅವನಿಗೆ ಸರ್ಕಾರಿ
ಕೆಲ್ಸಾ ಕೊಡ್ಸೋಕೆ , ನಮ್ ಕಡೆ ಮಂತ್ರಿಗೊಳು ಊ ಅಂದಿದ್ರು , ಅವರ ಸಹಾಯದಿಂದ
ಕೆಲಸದ ಆಡ್ರೂ ಸೈತಾ ಬಂದಿತ್ತು, ನಮ್ ಐದ ಯಾಕೋ ಕಾಣೆ ಮನಸು ಮಾಡ್ನಿಲ್ಲಾ ,
ಅಯ್ಯೋ ಬುಡಪ್ಪಾ , ನಮ್ ಆಸ್ತಿ, ಕಂತ್ರಾಟು , ಜಮೀನು, ನೋಡ್ಕಂಡು ಇರ್ತೀನಿ ಅಂತಾ
ಅಂದಾ, ನಾನು ಒಗ್ಲಿ ಅಂತಾ ಸುಮ್ಕಾದೆ . ಆದ್ರೆ ನಿಮ್ ಮಗಳು ಸರ್ಕಾರಿ ಕೆಲಸದ ಗಂಡು
ಬೇಕೂ ಅಂತಾಳೆ ಅಂತೀರಿ , ಯಂಗು ನಿಮ್ ಕಡೆ ಮಂತ್ರಿಗಳು ಅವ್ರೆ ಅಂತೀರಿ , ನೀಮೆ ಒಂದ್
ಸರ್ಕಾರಿ ಕೆಲ್ಸಾ ಕೊಡ್ಸಿಬುಡಿ ಅತ್ಲಾಗೆ , ಪಾಪ ನಿಮ್ ಹೆಣ್ಮಗಿ ಆಸೆ ಪಡ್ತಾಳೆ ,
ಅವ್ಲ್ಗೂ ಖುಸಿಯಾಯ್ತದೆ , ನಮ್ ದೇನು ಬಿದ್ದೊಗೋ ಮರ ಮುಂದೆ ಬಾಳ್ಮೆ ಮಾಡೋವ್ರು
ಅವ್ರೆ ಅಲ್ವೇ ....? ಅಂತಾ ಬೋ ಉಪಕಾರ ಮಾಡೋ ತರಹ ಮಾತು ನಿಲ್ಲಿಸಿದರು.
ಹುಡುಗನ ತಾಯಿ :- ಓ ಇವರ ಮಾತೂ ನಿಜವೇ , ನಮ್ದೇನು, ಮುಂದಕ್ಕೆ ಇವರೇ ಅಲ್ವೇ
ಸಂಸಾರ ಮಾಡೋವ್ರು, ನಮ್ ಕಡೆ ಇಂದಲೂ ಹುಡುಗಿಗೆ ಕೊಡೊ ಚಿನ್ನಾ, ಬಣ್ಣಾ, ಸೀರೆ ,
ಒಡವೆ , ಎಲ್ಲ ಕೊಡ್ತೀವಿ, ಸರೀಕರ ಮುಂದೆ ಸೈ ಅನ್ನೋ ಹಂಗೆ ನಮ್ ಸೊಸೆಗೆ
ಕೊಡಬೇಕಾದದ್ದ ಕೊಡ್ತೀಮಿ ಬುಡಿ, ಆದ್ರೆ ನಮ್ ಗಂಡು ಪಾಪ ಒಳ್ಳೆ ಮಗ , ಇಂತಾ
ಅಳಿಯನ ಪಡೆಯಾಕೆ ಪುಣ್ಯಾ ಮಾಡಿದ್ರಿ ಬುಡಿ , ಹುಡುಗಿ ಋಣ ನಿಮ್ಮ ಹಟ್ಟೀಲಿ ಅದೇ
ಅವಂದು , ಎಲ್ಲಾ ದ್ಯಾವ್ರ್ ಇಚ್ಚೆ , ನಮ್ ದೇನದೆ , ನಮ್ ಸೊಸೆಯ ನಮ್ ಮಗಳು
ನೋಡ್ಕಂದಂಗೆ ನೋಡ್ಕತೀಮಿ ಯೊಸ್ನೆ ಬ್ಯಾಡ , ನಿಮ್ ಮಗಳು ಅಳಿಯ ಓಡಾಡೂಕೆ ಕಾರು
ಗೀರೂ ಕೊಡಿ , ಅವನ ಜೊತೆಯವ್ರ್ಗೆಲ್ಲಾ ಅವರ ಮಾವನ ಮನೆಯವರು ಕಾರು ಕೊಟ್ಟವ್ರೆ ,
ಸರೀಕರ ಮುಂದೆ ಮರ್ವಾದೆ ಉಳೀಬೇಕೂ ಅಲ್ವೇ ಅಂದ್ರು .
ಹುಡುಗಿಯ ತಾಯಿ :- ಓ ಇದ್ಯಾಕೋ ದುಬಾರಿ ಆಯ್ತದೆ , ನಮ್ ಹೆಣ್ ಮದುವೆ
ಆಗಾಕೆ, ಸರ್ಕಾರಿ ಕೆಲಸದ ಗಂಡುಗಳೇ ಬಂದಿದ್ದೋ , ಆದ್ರೂವೆ ಯಾಕೋ ನಮ್ ಲಕ್ಸ್ಮಿ
ಯಾರ್ನೂವೆ ಒಪ್ಪಿರ್ನಿಲ್ಲಾ , ಯಾಕೋ ಈ ನಿಮ್ ಮಗನ್ನ ಒಪ್ಪ್ಕಂದವ್ಲೆ , ಈಗ ಸರ್ಕಾರಿ
ಕೆಲ್ಸಾ ಕೊಡ್ಸಿ , ಚಿನ್ನಾ , ಬಣ್ಣಾ , ಬಟ್ಟೆ, ಎಲ್ಲಾ ಕೊಟ್ಟು ಜೋರಾಗಿ ಮದುವೆ
ಮಾಡ್ತೀಮಿ , ದೀಪಾವಳಿ ಒತ್ಗೆ ಕಾರ್ ಕೊಡ್ತೀವಿ ಬುಡಿ , ಜೊತೆಗೆ ನಮ್ ಮಗಳ
ಹೆಸರಲ್ಲಿ ಐದು ಎಕರೆ ನೀರಾವರಿ ಜಮೀನದೆ ಅದೂ ಅವಳ್ಗೆ ಅಂತ್ಲೇ ಬುಟ್ತಿದ್ದೋ ಅಂದ್ರೂ, ಈಗ ಅದ ಮಾರ್ಬುಟ್ಟು ಮದುವೇ ಮಾಡಬೇಕೂ ಅಂದ್ರೂ . .
ಪುಟ್ಮಾದ ನ ಮನದಲ್ಲಿ ಮತ್ತೆ ಟೈರ್ ಪಂಚರ್ ಆಯ್ತು, ನನ್ ಕಡೆ ನೋಡಿ , ಅವರ
ಅಪ್ಪನಿಗೆ ಕಿವಿಯಲ್ಲಿ ಪಿಸುಗುಟ್ಟಿದ , ನನಗೋ ಇಲ್ಲಿನ ಸನ್ನಿವೇಶ ವಿಚಿತ್ರವಾಗಿ,
ಶೇರ್ ಮಾರುಕಟ್ಟೆ ಯಂತೆ ಕಾಣ್ತಿತ್ತು . ಒಂದು ಮದುವೆಯಲ್ಲಿ ಇಷ್ಟೊಂದು ಹಣ ಆಸ್ತಿಯ
ವ್ಯವಹಾರ ಇದ್ಯಾ ಅಂತಾ ಅಚ್ಚರಿ ಯಾಗಿತ್ತು.
ಹುಡುಗನ ತಂದೆ:- ನೋಡ್ರಪ್ಪಾ , ಜಾಸ್ತಿ ಎಳದಷ್ಟೂ ಕಿತ್ತೊಯ್ತದೆ , ಎಲ್ಲಾ ಒಂದು
ಹಂತಕ್ಕೆ ಬಂದದೆ , ಇನ್ನು ಕಾರ್ ಗೋಸ್ಕರ ಯಾಕೆ ಮುಖಮುನಿಸು , ಮದುವೇ ದಿನ ಧಾರೆ
ಮಂಟಪದಲ್ಲಿ ಹುಡುಗ ಹುಡುಗಿ, ಮದುವೆಮನೆ ಮುಂದೆ ನೀವು ಕೊಡೊ ಹೊಸ ಕಾರು ನಿಂತಿದ್ರೆ
, ನಿಮಗೂ ಸರೀಕರ ಮುಂದೆ ಮರ್ವಾದೆ ಎಚ್ಛಾಯ್ತದೆ , ನಮ್ ದುರಾಸೆಪುರದ
ಕಡ್ಯೋರಿಗೂ ನಿಮ್ ತಾಕತ್ತು ಗೊತ್ತಾಯ್ತದೆ , ಚೇರ್ಮನ್ ಮನೆ ಸೊಸೆ ಮನೆಯವರು
ಅಳಿಯನಿಗೆ ಒಂದು ಕಾರ್ ಕೊಡಲಿಲ್ಲಾ ಅನ್ನೋ ಅಪಾದನೆ ಬರ್ಬಾರ್ದು ನೋಡಿ, ಸುಮ್ಕೆ
ಖರ್ಚಿನ ಜೊತೆ ಇದೂ ಒಂದು ಖರ್ಚೂ ಮನಸ್ ಮಾದ್ಬುಡಿ ಅಂದ್ರೂ .
ಕೊನೆಗೆ ಅಳೆದು ಸುರಿದೂ ಎರಡೂ ಕಡೆಯವರೂ ಒಪ್ಪಿ ಹುಡುಗನ ಆಸೆಯಂತೆ ಹೊಸ ಮಾರುತಿ
ಬಿಳೀ ಕಾರು ಕೊಡಿಸಲು ಒಪ್ಪಿದರು, ಹುಡುಗನ ಕಡೆ ಎರಡು ಸಾವಿರ , ಹುಡುಗಿ ಕಡೆ ಎರಡು
ಸಾವಿರ ಜನ ಬರೋದಾಗಿ ಒಪ್ಪಂದವಾಗಿ , ಹುಡುಗನ ಕಡೆಯ ಜನರನ್ನು ಮದುವೇ ಮನೆಗೆ
ಕರೆತರಲು, ಎರಡು ಕಾರು, ಒಂದು ಬಸ್ಸು, ಎರಡು ಲಾರಿ ಕಳುಹಿಸಿಕೊಡಲು ಹುಡುಗಿಯ ಮನೆಯವರು
ಒಪ್ಪಿದರು . ಕಿತಾಪತಿ ಪುರದಲ್ಲಿ ನಡೆಯುವ ಮದುವೇಗೆ ಆರ್ಕೆಸ್ಟ್ರಾ ಬೇಕೆಂದು
ತೀರ್ಮಾನ ಆಯ್ತು. ಕಿತಾಪತಿಪುರ ದಲ್ಲಿ ದೊಡ್ಡ ಮದುವೇ ಛತ್ರ ದಲ್ಲಿ ಮದುವೇ ನಡೆಸಲು ಸರ್ವ ಸಮ್ಮತಿಯಿಂದ ತೀರ್ಮಾನವಾಯಿತು, ......... !
ನಮ್ಮ ಪುಟ್ಮಾದ ಆಕಾಶದಲ್ಲಿ ಹಾರಾಡಿದ , ಕನಸುಗಳ ಸಾಮ್ರಾಜ್ಯದಲ್ಲಿ ರಾಜ್ಯಭಾರ
ಮಾಡಿದ , ತನ್ನ ಮದುವೆಗೆ ಎಲ್ಲರನ್ನೂ ತಾನೇ ಖುದ್ದು ಆಹ್ವಾನಿಸಿ ಲಗ್ನ ಪತ್ರಿಕೆ
ಹಂಚಿದ . ಮದುವೆಯ ದಿನ ಬಂದೆ ಬಿಟ್ಟಿತು, ಹುಡುಗನ ಮನೆಯಿಂದ ಕಿತಾಪತಿ ಪುರದಲ್ಲಿ ಎರಡು ಕಾರು, ಒಂದು ಬಸ್ಸು, ಎರಡು ಲಾರಿ ಸಹಿತ ದಿಬ್ಬಣ ಹೊರಟಿತು . ಆಗಿನ ಮದುವೆಯಲ್ಲಿ ಮೊದಲು ಧಾರೆ , ನಂತರ ಆರತಕ್ಷತೆ ಇತ್ತು ,
ಬೆಳಿಗ್ಗೆಯೇ ಮದುವೇ ಮಾಡಿಸಲು ಬಂದಿದ್ದ ಪುರೋಹಿತರು ಶಾಸ್ತ್ರಾ ಶುರು
ಮಾಡಿದ್ದರು, ಕಾಶಿಯಾತ್ರೆ ಗೆ ಹೊರಟ ಗಂಡು ಮಂಗಳ ವಾಧ್ಯ ದೊಡನೆ ಛತ್ರದ ಮುಂದೆ
ಬಂತು, ಅಲ್ಲಿ ಶಾಸ್ತ್ರ ನಡೆದಿತ್ತು, ಆದರೆ ನಮ್ಮ ಪುಟ್ಮಾದ ನ ಕಣ್ಣು ಕಾರಿಗಾಗಿ
ಹುಡುಕುತ್ತಿತ್ತು , ಆದರೆ ಕಾರಿನ ದರ್ಶನವಿಲ್ಲಾ, ಅಲ್ಲೇ ಇದ್ದ ನನ್ನನ್ನು ಕರೆದು
ಗುರು ಇನ್ನೂ ಕಾರು ಬಂದಿಲ್ಲಾ ವಿಚಾರಿಸು , ಅಂತಾ ಹೇಳಿದ .
ನನಗೋ ನಾಚಿಕೆ , ಆದರೂ ಮನಸು ಮಾಡಿ ಹುಡುಗಿಯ ಚಿಕ್ಕಪ್ಪನ ಹತ್ತಿರ ಹೋಗಿ , ನಿಮ್ ಅಣ್ಣನ ಅಳಿಯ ಕೇಳ್ತಾ ಇದ್ದಾರೆ ಕಾರು ಬಂದಿಲ್ವಾ ? ಅಂದೇ, ಅವರು ನನ್ನನ್ನು ಕೆಕ್ಕರಿಸಿ ನೋಡಿ, ಸೋ ರೂಂ ಗೆ ಒಗವ್ರೆ ತರೋಕೆ ಬತ್ತದೆ ಇನ್ನೇನೂ ಅಂದರು , ಅದನ್ನೆ
ಪುಟ್ಮಾದನಿಗೆ ಹೇಳಿದೆ , ಸ್ವಲ್ಪ ಹೊತ್ತಾಯ್ತು, ಕಾಶಿಯಾತ್ರೆ ಶಾಸ್ತ್ರ ಮುಗೀತು,
ಮದುವೇ ಮಂಟಪಕ್ಕೆ ಹುಡುಗನನ್ನು ಕರೆದೊಯ್ದರು, ಪುರೋಹಿತರು, ಉತ್ಸಾಹದಿಂದ ಮಂತ್ರಾ
ಹೇಳುತ್ತಿದ್ದರು , ಆದರೆ ನಮ್ಮ ಗಂಡು ಮಾತ್ರ ಮದುವೇ ಮಂಟಪದಲ್ಲಿ ಕಾರನ್ನು
ಹುಡುಕುತ್ತಿತ್ತು, ಮತ್ತೆ ನನ್ನನ್ನು ಹತ್ತಿರ ಕರೆದು ಕಾರ್ ಬಂತಾ ನೋಡು ? ಅಂತಾ ಸಿಟ್ಟಿನಿಂದಾ ಕೇಳಿದನು
ನನಗೋ ಧರ್ಮ ಸಂಕಟ ಮತ್ತೆ ಆಚೆ ಹೋಗಿ ನೋಡಿದೆ ಕಾರಿನ ಸುಳಿವಿಲ್ಲಾ , ಅಲ್ಲೇ ಇದ್ದ ಹುಡುಗಿಯ ತಂದೆಯವರನ್ನು ಕೇಳ್ದೆ , ಕಾರಾ
ಇನ್ನೇನು ಬತ್ತುದೆ , ತರಾಕೆ ಒಗವ್ರೆ , ನಿಮ್ ಸಿನೆಹಿತರಿಗೆ ನೆಮ್ದಿಯಾಗಿ ಇರಾಕೆ
ಯೋಳಿ , ನಾಮು ಅಂಗೆಲ್ಲಾ ಖಾಲಿ ಪೋಲಿ ಜನ ಅಲ್ಲಾ ಮಾತು ಅಂದ್ರೆ ಮಾತೆಯ , ಅಂದ್ರು
ಅದನ್ನೇ ನನ್ನ ಈ ಎಡವಟ್ಟು ಗೆಳೆಯನಿಗೆ ಹೇಳಿದೆ , ಅಷ್ಟರಲ್ಲಿ ಅವನ ಪಕ್ಕದಲ್ಲಿ
ಹುಡುಗಿಯನ್ನು ಕೂರಿಸಿದ್ದರು ಶಾಸ್ತ್ರ ಮುಂದುವರೆದಿತ್ತು, ಆ ಹುಡುಗಿ ಪುರೋಹಿತರು
ಹೇಳಿದ್ದನ್ನು ಭಕ್ತಿಯಿಂದ ಮಾಡುತ್ತಿದ್ದರೆ, ಪುಟ್ಮಾದ ಮಾತ್ರ ಕಾರನ್ನು
ನೆನೆಸಿಕೊಂಡು ಕಾಟಾ ಚಾರಕ್ಕೆ ಕುಳಿತಿದ್ದ, ನನ್ನನ್ನೂ ಆ ಹುಡುಗಿಯನ್ನು
ಕೆಕ್ಕರಿಸಿಕೊಂಡು ನೋಡುತ್ತಿದ್ದ . ನಾನು ಅವನ ನೋಟ ಎದುರಿಸಲಾಗದೆ ಮರೆಯಾಗಿ ನಿಂತೇ
ಅಷ್ಟರಲ್ಲಿ ಯಾರ್ರೀ ಹುಡುಗನ ಸ್ನೇಹಿತ ಅನಿಲ್ ಮುಂದೆ ಬನ್ರೀ , ಅಂದ್ರೂ ನಾನೂ ಮೆತ್ತಗೆ ಹತ್ತಿರ ಹೋದೆ, ಪುಟ್ಮಾದ ಮಾತಾಡಿ, "ಲೇ
ಗುರು, ಅದೇನು ಕಾರು ಬತ್ತುದೋ ಇಲ್ವೋ ಕೇಳಪ್ಪ , ನಮಗೆ ಇಂಗಾ ಅವಮಾನ ಮಾಡಾದು
ಇವ್ರು ?, ಮುಂಚೆನೇ ಯೋಳಿದ್ರೆ ಹತ್ತು ಹೊಸ ಕಾರು ತಂದು ನಿಲ್ಲಿಸ್ತಿದ್ದೆ , ರೀ
ಪುರೋಯ್ತರೆ ಇರೀ ಒಸಿ ಕಾರ್ ಬರಲಿ ಆಮ್ಯಾಕೆ ತಾಳಿ ಕಟ್ಟ್ಸೋರಂತೆ ," ಅಂದಾ, ಅದಕ್ಕೆ ಹುಡುಗನ ಅಪ್ಪಾ , ಅಮ್ಮಾ ಕೂಡ ಹುಡುಗಿಯ ಕಡೆಯವರನ್ನು ವಿಲ್ಲನ್ ಗಳ ತರಹ ನೋಡುತ್ತಿದ್ದರು,
ಚಿತ್ರ ಕೃಪೆ ಅಂತರ್ಜಾಲ |
ಧಾರೆಗೆ ಇನ್ನು ಕೇವಲಇಪ್ಪತ್ತು ನಿಮಿಷ ಇತ್ತು, ಪುರೋಹಿತರು ಸಾರ್ ನಿಮ್ಮ
ಗೆಳೆಯನಿಗೆ ಹೇಳಿ , ಹಟಾ ಬೇಡಾ ಅಂತಾ , ಕಾರು ಬಂದೆ ಬರುತ್ತೆ, ಹೊಸ ಕಾರು ಬುಕ್
ಮಾಡುವಾಗ , ನಾನೇ ಒಳ್ಳೆ ದಿನಾ ನೋಡಿ ಕಳುಹಿಸಿದ್ದೆ , ಇಬ್ಬರ ಕೂಟಗಳನ್ನೂ
ಲೆಕ್ಕಾಚಾರ ಮಾಡಿ ಬಿಳೀ ಕಾರನ್ನೇ ಬುಕ್ ಮಾಡಲು ತಿಳಿಸಿದ್ದೆ , ಎಂದರು,
Labels:
ಹಾಸ್ಯ ಕಥೆ
ನಾನು ಒಬ್ಬ ಕನ್ನಡ ಪ್ರೇಮಿ,
ಕನ್ನಡವನ್ನು ಎಲ್ಲೆಡೆ ಕಾಣುವ ಬಯಕೆ....
ಜೈ ಕನ್ನಡಾಂಬೆ....
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)
1.. ಜಾಹೀರಾತು
-
ಇದುವರೆಗೆ ಸಂಗ್ರಹವಾದ ಶರಣ ಶರಣೆಯರ ಹೆಸರುಗಳು ಕೃಪೆ ಕಲ್ಯಾಣ ಕಿರಣ ಸೆಪ್ಟೆಂಬರ್ ೨೦೦೮ 626 ಹೆಸರುಗಳು
-
ಕೆಂಪು '' ಕುಂಕುಮ '' ವಿರುವುದು 'ಹಣೆಗಾಗಿ' ಹಸಿರು '' ಗಾಜಿನ ಬಳೆ '' ಗಳು 'ಕೈಗಳಿಗಾಗಿ' ಹೊಳೆ...
-
ನಾಮಕರಣಕ್ಕೆ "ಡ" ಕಾರದ ಹೆಣ್ಣಿನ ಹೆಸರುಗಳಿದ್ದರೆ ಹೇಳಿ... ಬೇಗ ಹೇಳಿ…. ನಿಮ್ಮ ಉತ್ತರ ಈ ತಾಣಕ್ಕೆ ಕಮೆಂಟ್ ಅಥವಾ 8951734903 ಗೆ ಸಂದೇಶ / ವಾ...
-
೧ ಬಾಲ್ಯ ಜೀವನ ೨ ಡಾ. ವಿಷ್ಣುವರ್ಧನ್ ಅಭಿನಯದ ಸಂಪೂಣ೯ ಚಿತ್ರಗಳು ೨.೧ ಕನ್ನಡ ೨.೨ ಹಿಂದಿ ೨.೩ ತಮಿಳು ೨.೪ ತೆಲುಗು ೨.೫ ಮಲಯಾಳಂ ಬಾಲ್ಯ ...
ಪದ ಪುಸ್ತಕ
ಹುಡುಕಾಟ ಫಲಿತಾಂಶಗಳು